Wednesday, 21 December 2016

ಸೆ. 5ರಂದು ನಗರದಲ್ಲಿ ಪ್ರತಿಭಟನೆ (ಹೊಸಪೇಟೆ)

ಹೊಸಪೇಟೆ: ಪ.ಜಾತಿಯ ಒಳ ಮೀಸಲು ಹಂಚಿಕೆ ಕುರಿತ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ಅವೆಜ್ಞಾನಿಕವಾಗಿದೆ ಎಂದು ನ್ಯಾ. ಎ.ಜೆ. ಸದಾಶಿವ ಆಯೋಗ ವರದಿ ವಿರೋಧಿ ಹೋರಾಟ ಒಕ್ಕೂಟ ಆಗ್ರಹಿಸಿದೆ.

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಮುಖಂಡ ಭೀಮಾನಾಯ್ಕ ಮಾತನಾಡಿ, ನ್ಯಾ. ಎ.ಜೆ. ಸದಾಶಿವ ಆಯೋಗಕ್ಕಾಗಿ 12 ಕೋಟಿ ರೂ. ಖರ್ಚು ಮಾಡಿದರೂ ವಸ್ತುನಿಷ್ಠ ವರದಿ ನೀಡಿಲ್ಲ.

ಈ ವರದಿಯ ಸಮೀಕ್ಷೆ ಸಂಶಯಾಸ್ಪದವಾಗಿದೆ. ಪ.ಜಾತಿ ಪಟ್ಟಿಯಲ್ಲಿ 101 ಜಾತಿಗಳಿದ್ದು, 99 ಜಾತಿಯ ಜನರಿಗೆ ಅನ್ಯಾಯ ಮಾಡುವ ರೀತಿಯಲ್ಲಿ ವರದಿ ನೀಡಲಾಗಿದೆ.


ವರದಿ ಖಂಡಿಸಿ, ಸೆ.5ರಂದು ನಗರದಲ್ಲಿ ಬಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಕನಿಷ್ಠ 22 ಸಾವಿರ ಜನರು ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಗುಳೆ

ರಾಜ್ಯದ ತಾಂಡಾಗಳಿಂದ, ಭೋವಿ ಕಾಲೊನಿಗಳಿಂದ ಜನ ಗುಳೆ ಹೋಗುತ್ತಿದ್ದಾರೆ. ಪಕ್ಕದ ಗೋವಾ ರಾಜ್ಯಕ್ಕೆ 15ರಿಂದ 20 ಲಕ್ಷ ಲಂಬಾಣಿಗರು ಪ್ರತಿ ವರ್ಷ ಗುಳೆ ಹೋಗುತ್ತಾರೆ.

ಅಲ್ಲಿಯೂ ಬಿಜೆಪಿ ನೇತತ್ವದ ಸರಕಾರವಿದ್ದು, ಸಿಎಂ ಜಗದೀಶ್ ಶೆಟ್ಟರ್ ಅಲ್ಲಿನ ಸರಕಾರದಿಂದ ಮಾಹಿತಿ ಪಡೆಯಲಿ ಎಂದು ಸವಾಲು ಹಾಕಿದರು.

ಮುಖಂಡರಾದ ದೊಡ್ಡ ರಾಮಣ್ಣ, ರಾಮಾನಾಯ್ಕ, ವಿ. ಹನುಮಂತಪ್ಪ, ಕಷ್ಣಾನಾಯ್ಕ, ಬಾಳಪ್ಪ ತಿಮ್ಮಪ್ಪ, ಅಡಿವೆಪ್ಪ, ರಾಮಾಂಜೀನಿ ಮತ್ತಿತರರಿದ್ದರು.



ವಿಕ ಸುದ್ದಿಲೋಕ| Updated: Sep 3, 2012

No comments:

Post a Comment