Wednesday, 21 December 2016

ಸದಾಶಿವ ಆಯೋಗ & ಲಂಬಾಣಿ ಜನಾಂಗ

ಸಮೂಹ ಸಂಘಟನೆ ಇಲ್ಲದಿದ್ದರೆ ವೈಯಕ್ತಿಕ ಹಾಗೂ ಸಾಮೂಹಿಕ ಪ್ರಗತಿ ಹಾಗೂ ಕಲ್ಯಾಣ ಅಸಾಧ್ಯ.
ಸದಾಶಿವ ಆಯೋಗ & ಲಂಬಾಣಿ ಜನಾಂಗ
ಚೋಳರಾಜ್ ನಾಯ್ಕ್, ಬಳ್ಳಾರಿ.
ಲಂಬಾಣಿ ಜನಾಂಗ:-  ಕರ್ನಾಟಕ ರಾಜ್ಯದಲ್ಲಿ ಲಂಬಾಣಿ (ನಾವು) ಜನಾಂಗದ ಜನಸಂಖ್ಯೆ ಸುಮಾರು 35-40 ಲಕ್ಷಕ್ಕೂ ಹೆಚ್ಚಿದೆ. ಲಂಬಾಣಿ (ನಾವು)ಗಳು ಒಂದು ಬುಡಕಟ್ಟು ಜನಾಂಗದವರುರಾಷ್ಟ್ರಮಟ್ಟದಲ್ಲಿ ನಮ್ಮನ್ನು ಬಂಜಾರಿ (ಬಂಜಾರ) ಗಳೆಂದು ಕರೆಯುತ್ತಾರೆ. ನಾವು ನಮ್ಮದೇ ಆದ ಭಾಷೆ, ಸಂಸ್ಕೃತಿ, ಆಚಾರ, ವಿಚಾರ, ಪರಂಪರೆ, ನಂಬಿಕೆಗಳು, ಪದ್ಧತಿಗಳು, ಸಂಪ್ರದಾಯಗಳು, ಸಾಹಿತ್ಯ, ಸಂಗೀತ, ನೃತ್ಯಕಲೆ, ಕುಶಲಕಲೆ ಮುಂತಾದ ಅಂಶಗಳಿಂದ ಇತರರಿಂದ  ಭಿನ್ನವಾಗಿರುತ್ತೇವೆನಮ್ಮ ಪೂರ್ವಜರು ನದಿ, ಕೆರೆ, ಕಟ್ಟೆ ಮುಂತಾದ ನೀರಿನ ಮೂಲದ ಹತ್ತಿರ ತಮ್ಮದೇ ಆದ ಜನವಸತಿಗಳನ್ನು ಕಟ್ಟಿಕೊಂಡು ಬದುಕಿದ್ದಾರೆ, ಅವು ಇಂದು ತಾಂಡಗಳಾಗಿವೆ.  ನಾವು ಮತ್ತು ನಮ್ಮ ಪೂರ್ವಜರು ಅರಣ್ಯ ಉತ್ಪಾದನೆಗಳನ್ನು (ಕಟ್ಟಿಗೆ, ಬೀಜ, ಎಲೆ) ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದವೆ.  ನಂತರದ  ದಿನಗಳಲ್ಲಿ  ಕೃಷಿ  ಕಲಿತಿದ್ದೇವೆಬಡತನ, ಅನಕ್ಷರತೆ, ತಿಳುವಳಿಕೆಯ ಕೊರತೆ, ಸೂಕ್ತ ಮಾರ್ಗದರ್ಶನದ ಕೊರತೆ, ಇವುಗಳು ನಮಗೆ ಕೇಳದೇ ದೇವರು ಕೊಟ್ಟ ವರಗಳು. ಈ ವರಗಳಿಂದಾಗಿ  ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಆಡಳಿತ ಮುಂತಾದ ಕ್ಷೇತ್ರಗಳಲ್ಲಿ ತುಂಬಾ ಹಿಂದುಳಿಯುವ ಹಾಗಿದೆ.
ಕರ್ನಾಟಕದಲ್ಲಿ ತಾಂಡ ಹಾಗೂ ಲಂಬಾಣಿ ಜನಾಂಗದ ಸ್ಥಿತಿಗತಿ:-
·         ಪ್ರಸ್ತುತ ನಮ್ಮ ತಾಂಡಗಳಲ್ಲಿ ಅಕ್ಷರಸ್ಥರ ಸಂಖ್ಯೆ ತುಂಬಾ ಕಡಿಮೆ. ಇದಕ್ಕೆ ಕಾರಣ ನಮ್ಮಲ್ಲಿರುವ ಬಡತನ.
·          ನಮ್ಮ ತಾಂಡಗಳಲ್ಲಿ ಮನೆಯ ಕುಟುಂಬದ ಸದಸ್ಯರಲ್ಲಿ ಕೇವಲ ಒಬ್ಬರು-ಇಬ್ಬರು ಮಾತ್ರ ಅಕ್ಷರಸ್ಥರು, ಉಳಿದವರು ಕೃಷಿಕಾರ್ಮಿಕರು.
·         ಲಂಬಾಣಿ ಜನಾಂಗದಲ್ಲಿ ಒಪ್ಪತ್ತಿನ ಗಂಜಿಗಾಗಿ ಮಕ್ಕಳನ್ನು ಮಾರಾಟ ಮಾಡುವಂತಹ ಪದ್ದತಿ ಇನ್ನೂ ಜೀವಂತವಾಗಿದೆ.
·         ಕೂಲಿಗಾಗಿ ಪರಸ್ಥಳಗಳಿಗೆ ಗುಳೆ ಹೋಗುತ್ತಿರುವುದು
·          ಸರ್ಕಾರದ ಯೋಜನೆಯ ವಿವರಗಳು ಗೊತ್ತಿಲ್ಲ & ಬ್ಯಾಂಕ್ ಗಳಿಂದ ದೊರೆಯುವ ಸೌಲಭ್ಯಗಳ ಮಾಹಿತಿಯಿಲ್ಲ.
·         ಸೂಕ್ತ ಹಾಗೂ ಆಧುನಿಕ ಕೃಷಿ ಪದ್ದತಿಯ ಅರಿವಿಲ್ಲ.  
·         ರೈತರ ಸಮಸ್ಯೆ ಗಳು & ಆತ್ಮಹತ್ಯೆಗಳು.
·         ಮಹಿಳೆಯರ ಸಾಕ್ಷರತೆ ತುಂಬಾ ಕಡಿಮೆ.  
·         ಹೆಚ್ಚಿನವರು ಮಧ್ಯ ವಯಸ್ಕರು, ಪುರುಷರು, ಅನಕ್ಷರಸ್ಥರು, ರೈತರು, ಪ್ರತಿ ಕುಟುಂಬದಲ್ಲಿ ಒಬ್ಬ ಇಲ್ಲವೆ ಇಬ್ಬರು ದುಡಿಯುವ ವ್ಯಕ್ತಿಗಳನ್ನು ಹೊಂದಿದ್ದಾರೆ.  
·         ತಾಂಡದಲ್ಲಿ ಕೇವಲ 100 ರಲ್ಲಿ 30 ಜನ ಮಾತ್ರ ಅಲ್ಪ ಪ್ರಮಾಣದ ಸ್ವಂತ ಭೂಮಿಯನ್ನು ಹೊಂದಿದ್ದು, ಉಳಿದವರು ಗುತ್ತಿಗೆ ಆಧಾರದಲ್ಲಿ  ಸಾಗುವಳಿ ಮಾಡುತ್ತಿದ್ದಾರೆ. 
·         ಇಂದಿಗೂ ತಾಂಡಗಳಲ್ಲಿ ಸಾರಿಗೆಗಾಗಿ  & ಕೃಷಿಗಾಗಿ ರೈತರು ಎತ್ತು-ಗಾಡಿಗಳನ್ನು ಅವಲಂಬಿಸಿದ್ದಾರೆ.
·         ಉಳಿತಾಯ ಮಾಡುವ ಹವ್ಯಾಸವಿಲ್ಲ. ಜೀವವಿಮೆಯಂತು ತುಂಬಾ ದೂರದ ಮಾತು.    
·         ತಾಂಡಗಳಲ್ಲಿ ಮಣ್ಣಿನ ಮನೆಗಳು, ಷೀಟ್ ಮನೆಗಳು, ಹಂಚಿನ ಮನೆಗಳು ಜಾಸ್ತಿಯಾಗಿವೆ.
·         ಶೌಚಾಲಯಕ್ಕಾಗಿ ಹಾಗೂ ತಮ್ಮ ನೈಸರ್ಗಿಕ ಅವಶ್ಯಕತೆಗಳಿಗೆ ತಾಂಡಾಗಳ ಸುತ್ತಮುತ್ತಲಿರುವ ಬಯಲನ್ನೇ ಉಪಯೋಗಿಸುತ್ತಾರೆ.
  • ಮನೆಗಳಲ್ಲಿ ವಿದ್ಯುಚ್ಛಕ್ತಿಯನ್ನು ಹೊಂದಿದ್ದಾರೆ. ಇದರಲ್ಲಿ ಭಾಗ್ಯಜ್ಯೋತಿ  ಗಳು ಹೆಚ್ಚಾಗಿವೆ. ಮನೆಗಳಲ್ಲಿ ಗಾಳಿ ಬೆಳಕು ಸರಿಯಾಗಿಲ್ಲ. ಟಿ.ವಿ, ರೇಡಿಯೋಗಳಿಲ್ಲದ ಮನೆಗಳು ಕೂಡ ನಮ್ಮ ತಾಂಡಗಳಲ್ಲಿ ಸಿಗುತ್ತವೆ.
  • ಎಲ್ಲಾ ತಾಂಡಗಳಲ್ಲಿಯೂ ಒಂದಲ್ಲಾ ಒಂದು ನೀರಿನ ಮೂಲ ಇದೆ. ಆದರೆ ಸ್ವಚ್ಛವಾದ ನೀರು ಯಾವ ತಾಂಡದಲ್ಲೂ ಸಿಗುತ್ತಿಲ್ಲ.
·         ಹುಡುಗಿಯರು ಋತುಮತಿಯಾದರೆ ಅವರನ್ನು ಮೂರು ದಿನ ಬೇರೆ ಮನೆಯಲ್ಲಿ (ಒಂದು ಮೂಲೆಯಲ್ಲಿ) ಕೂಡಿಸುವ ಅನಿಷ್ಟ ಪದ್ದತಿಗಳು ಚಾಲ್ತಿಯಲ್ಲಿವೆ.
·         ತಾಂಡಗಳಲ್ಲಿ ಶಿಶು ಮರಣ ದರ ಹೆಚ್ಚಳ .
·         ಬಾಣಂತಿಯರಿಗೆ ಪೌಷ್ಟಿಕಾಂಶದ ಕೊರತೆ. 
ಸದಾಶಿವ ಆಯೋಗದ ವರದಿ ಜಾರಿಯಾದರೆ  ನಮಗೆ ಉಂಟಾಗುವ ನಷ್ಟ, ಸಮಸ್ಯೆ ಮತ್ತು ಅವಮಾನ.
·          ನಾವು ಸಾಮಾಜಿಕವಾಗಿ ಸುಧಾರಿಸಲು ಪ್ರಯತ್ನ ಪಡುತ್ತಿರುವಾಗ, ನಮ್ಮ ಜನಾಂಗವನ್ನು ಪ್ರೋತ್ಸಾಹಿಸಬೇಕಾದ ಸರ್ಕಾರವು, ನಮಗೆ ಸಿಗಬೇಕಾದ ಸೌಲಭ್ಯಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. ಈಗೀಗ ನಾವು ನಮ್ಮ ಸುಧಾರಣೆಯ ಒಂದೆರೆಡು ಮೆಟ್ಟಿಲುಗಳನ್ನು ಹತ್ತುತ್ತಿರುವಾಗ, ಆ ಮೆಟ್ಟಿಲುಗಳಿಂದ ಕೆಳಗೆ ಕಾಲೆಳಿಯಲು ಪ್ರಯತ್ನ ಮಾಡುತ್ತಿದ್ದಾರೆ.  ಒಂದು ವೇಳೆ ನಮ್ಮ ವಿರೋಧದ ನಡುವೆಯು ಸದಾಶಿವ ಆಯೋಗ ಜಾರಿಯಾದರೆ, ಈಗೀಗ ಬದಲಾವಣೆಯ ಹಾದಿಯನ್ನು ಕಾಣುತ್ತಿರುವ ತಾಂಡಗಳು ಹಾಗೂ ನಾವು ಮತ್ತೇ ಹಿಂದಿನ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ನಾವು ಈಗಾಗಲೆ ಎದುರಿಸಿ ಬಂದತಂಹ ಸಮಸ್ಯೆಗಳು ತುಂಬಾ ಕಷ್ಟಕರವಾದುದ್ದಾಗಿವೆ. ಈ ಸಮಸ್ಯೆಗಳು ನಮ್ಮ ಮುಂದಿನ ಪೀಳಿಗೆಯವರು ಅನುಭವಿಸಬೇಕಾ ? 
·           ನಮ್ಮ ತಾಂಡಗಳಲ್ಲಿನ ಸಾಕ್ಷರತೆ ಪ್ರಮಾಣ ಇಂದಿಗೂ ಅಷ್ಟಕ್ಕಷ್ಟೆ. ಇನ್ನೂ ಮಹಿಳಾ ಸಾಕ್ಷರತೆ ! ಅದನ್ನು ಕಲ್ಪನೆಯು ಮಾಡುವಹಾಗಿಲ್ಲ, ಹಾಗಿದೆ ನಮ್ಮ ತಾಂಡಗಳ ಸಾಕ್ಷರತೆ.   ಇಂತಹ ಸಂದರ್ಭದಲ್ಲಿ  ಈಗೀಗ ನಮ್ಮ ಸಹೋದರರು ಹಾಗೂ ಸಹೋದರಿಯರು ಕಾಲೇಜು ಮೆಟ್ಟಿಲುಗಳನ್ನು ಹತ್ತುತ್ತಿರುವ ಹಂತದಲ್ಲಿ, ಅವರ ಹಾಗೂ ನಮ್ಮ  ಏಳಿಗೆಯನ್ನು ತುಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ನಮಗೆ ಯಾಕೆ ಅನಿಸುತ್ತಿಲ್ಲ?  ನಮ್ಮ ಜನಾಂಗದಲ್ಲಿ ಉನ್ನತ ಶಿಕ್ಷಣ ಪಡೆದವರ ಸಂಖ್ಯೆ ಎಷ್ಟಿದೆ?  ಸರ್ಕಾರದಲ್ಲಿ ಉನ್ನತ ದರ್ಜೆಯ ಉದ್ಯೋಗ ಪಡೆದವರ ಸಂಖ್ಯೆ ಎಷ್ಟಿದೆ?  ಶಿಕ್ಷಣ & ಉದ್ಯೋಗದಲ್ಲಿ ನಮ್ಮ ಮಹಿಳೆಯರ ಸಂಖ್ಯೆ ಎಷ್ಟಿದೆ? ನಮ್ಮಲ್ಲಿ ಎಷ್ಟು ಜನ ಮೆಡಿಕಲ್, ಇಂಜಿನಿಯರಿಂಗ್ ಓದುತ್ತಿದ್ದಾರೆ?  ನಾವು ಅಭಿವೃದ್ದಿ ಹೊಂದಿದ್ದೇವೆ ಅಂತ ನಮಗೆ ಯಾವಾಗಾದರೂ ಅನಿಸಿದೇಯೆ?  ಈಗ ನಾವು ಪರಿಶಿಷ್ಟ ಜಾತಿಯ ಸೌಲಭ್ಯವನ್ನು ಪಡೆಯುತ್ತಿರುವಾಗಲೇ ನಾವು ಇಷ್ಟೋಂದು ಹಿಂದುಳಿದಿರುವಾಗ, ಪರಿಶಿಷ್ಟ ಜಾತಿಯಲ್ಲಿನ ಸೌಲಭ್ಯ ಪಡೆಯದೇ ನಾವು ಹಾಗೂ ನಮ್ಮ ತಾಂಡಗಳು ಅಭಿವೃದ್ಧಿ ಹೊಂದಲು ಸಾಧ್ಯವೆ ಇಲ್ಲ.
·          ಇನ್ನೂ ನಾವು ಆರ್ಥಿಕವಾಗಿ ಗಮನಿಸಿದಾಗ, ನಮ್ಮ ತಾಂಡಗಳಲ್ಲಿ ಜನ ಹೆಚ್ಚಾಗಿ ಕಂಡುಬರುವುದು ಯಾವುದಾದರು ಹಬ್ಬ ಹರಿದಿನಗಳಲ್ಲಿ. ಯಾಕೆಂದರೆ, ಉಳಿದ ಅವಧಿಗಳಲ್ಲಿ ಅವರು ಕೂಲಿಗಾಗಿ ಗುಳೆ ಹೋಗುವುದು ಸಾಮಾನ್ಯ ವಾಗಿದೆ. ಹಾಗಾಗಿ ಇಂದಿನ ತಾಂಡಗಳಲ್ಲಿ ಹೆಚ್ಚಾಗಿ ಮುದುಕರು & ಮಕ್ಕಳನ್ನು ಹೊರತು ಪಡಿಸಿದರೆ ಯಾರು ಸಿಗುವುದಿಲ್ಲ. ಒಪ್ಪತ್ತಿನ ಗಂಜಿಗಾಗಿ ಹಸುಗೂಸುಗಳನ್ನು ಮಾರಾಟ ಮಾಡುವುದು.    ಇದರಿಂದ ತಿಳಿಯುತ್ತದೆ ನಾವು & ನಮ್ಮ ತಾಂಡಗಳು ಆರ್ಥಿಕವಾಗಿ ಎಷ್ಟರಮಟ್ಟಿಗೆ ಸಧೃಡರಾಗಿದ್ದಿವಿ ಎಂದು.  ಹೀಗಾಗಿ ಮುಂದಿನ ದಿನಗಳಲ್ಲಿ ನಾವು ಸಮಾಜ ಕಲ್ಯಾಣ ಇಲಾಖೆಯ ಸೌಲಭ್ಯಗಳು. SC/ST ನಿಗಮದ ಸೌಲಭ್ಯಗಳು, ಅಂಬೇಡ್ಕರ್ ನಿಗಮದ ಸೌಲಭ್ಯಗಳನ್ನು ಕಳೆದು ಕೊಂಡರೆ, ನಾವು ಆರ್ಥಿಕವಾಗಿ ಮುಂದೆಬರುವುದು ತುಂಬಾ ಕಷ್ಟವಾಗುತ್ತದೆ.  
ನಾವು ಮಾಡಬೇಕಾದ ಕಾರ್ಯಗಳು.
·         ನಮ್ಮ ಜನಾಂಗದ ಪ್ರತಿಯೊಬ್ಬ ವ್ಯಕ್ತಿ, ವಿದ್ಯಾರ್ಥಿಗಳು, ವಿದ್ಯಾವಂತರು,  ಕಾರಬಾರಿಗಳು, ನಾಯಕ್ ಗಳು, ಮುಖಂಡರು, ಸಂಘಟನೆಗಳು, ಸ್ವಾಮಿಜಿಗಳು, ಸಾಮಾಜಿಕ ಕಾರ್ಯಕರ್ತರು,  ಅಧಿಕಾರಿಗಳು, ರಾಜಕಾರಣಿಗಳು, ತಾಂಡದ ಜನಾಂಗೀಯ ನಾಯಕರು, ಯುವಕ ಸಂಘದ ಮುಂದಾಳುಗಳು,ಪ್ರತಿಯೊಬ್ಬರು ಇದರ ಬಗ್ಗೆ ಶ್ರಮಿಸಬೇಕು.
·          ಎಲ್ಲಾ ತಾಂಡಾಗಳಲ್ಲಿರುವ ನಾಯಕ್, ಕಾರಭಾರಿ, ಡಾವೊ, ಢಾವಸಾನಗಳ ಮೂಲಕ ಸದಾಶಿವ ಆಯೋಗ ವರದಿಯ ವಿರುದ್ದ ಜಾಗೃತಿ ಮೂಡಿಸುವಂತೆ ಕಾರ್ಯಕೈಗೊಳ್ಳಬೇಕು.
·         ಸ್ಥಳಿಯ ಮುಖಂಡರು ತಮ್ಮ ತಮ್ಮ ಗ್ರಾಮ / ಪಂಚಾಯಿತಿ  ಮಟ್ಟದಲ್ಲಿ ನಮ್ಮ ಜನಾಂಗದವರಲ್ಲಿ ಆಯೋಗದ ಶಿಫಾರಸ್ಸುಗಳು ಹಾಗೂ ಈಗ ಆಗುತ್ತಿರುವ ಬೆಳವಣಿಗೆಗಳನ್ನ, ನಾವು ಈಗ ಎಚ್ಚರವಾಗದೇ ಇದ್ದರೆ ಮುಂದಾಗುವ ಪರಿಣಾಮದ ಬಗ್ಗೆ ತಿಳಿಸಬೇಕು.
·         ರಾಜ್ಯಮಟ್ಟದ ಸಮಾವೇಶದ ಕರೆಕೊಟ್ಟಾಗ ಪ್ರತಿಯೊಬ್ಬರು ಕೂಡ ಭಾಗಿಯಾಗಿ ನಮ್ಮ ಬಲವನ್ನು ಹಾಗು ಒಗ್ಗಟ್ಟನ್ನು ಪ್ರದರ್ಶಿಸಬೇಕು.
·         ಜನಾಂಗಕ್ಕೆ ಸಂಬಂದಿಸಿದಂತೆ ಒಂದು ನಿರ್ಧಿಷ್ಟ website ಅನ್ನು ರಚನೆಮಾಡಿ, ಮಾದ್ಯಮಗಳ ಮೂಲಕ ಪ್ರಚಾರಮಾಡಿ, ರಾಜ್ಯದ ಪ್ರತಿಯೊಬ್ಬ ಗೋರ್ಮಾಟಿಯು ಸಂಪರ್ಕದಲ್ಲಿರುವಂತೆ ಮನವಿಮಾಡುವುದು, ಹಾಗೂ ಅವರ ಸಲಹೆಗಳು ಮಾರ್ಗದರ್ಶನಗಳನ್ನು ಪಡೆಯುವುದು. ಆಯೋಗದ ವಿರುದ್ದ ಕರೆಕೊಟ್ಟಾಗಾ ಅಸಂಖ್ಯಾತ ಸಂಖ್ಯೆಯಲ್ಲಿ ಭಾಗವಹಿಸುವುದು.  
ನಮ್ಮ ತಾಂಡದ ಪ್ರಮುಖ ದೇವಸ್ಥಾನಗಳಲ್ಲಿ (ಸೇವಲಾಲ್ & ಮರಿಯಮ್ಮ ದೇವಿ) ಆಯೋಗದ ಬಗ್ಗೆ ತಿಳುವಳಿಕೆ ನೀಡಲು ಬಿತ್ತಿಪತ್ರಗಳನ್ನು ಅಂಟಿಸುವುದು.

ನ್ಯಾ. ಎ.ಜೆ. ಸದಾಶಿವ ಆಯೋಗ ವು  ದಿನಾಂಕ:- 2005 ಸೆ.25ರಂದು. ಎನ್. ಧರ್ಮಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಚನೆಯಾಗಿದ್ದು , ನ್ಯಾ. .ಜೆ. ಸದಾಶಿವ ನೇತೃತ್ವದಲ್ಲಿ ವಿಚಾರಣೆ ಆಯೋಗ ರಚಿಸಿದ್ದ ರಾಜ್ಯ  ಸರಕಾರ, 'ಕರ್ನಾಟಕದ ಪರಿಶಿಷ್ಟ ಜಾತಿಗಳಿಗೆ ಸಾಂವಿಧಾನಿಕ ಸೌಲಭ್ಯ ಹಾಗೂ ಅವುಗಳ ಹಂಚಿಕೆಯಲ್ಲಿ ಆಗಿರುವ ತಾರತಮ್ಯ ಪರಿಶೀಲನೆ' ನಡೆಸಿ ವರದಿ ಸಲ್ಲಿಸುವ ಹೊಣೆ ಒಪ್ಪಿಸಿತ್ತು.
2005 ರಲ್ಲಿ ರಚನೆಯಾಗಿದ್ದ ಆಯೋಗವು ತನ್ನ ವರದಿ ಸಲ್ಲಿಸಿದ್ದು 2012 ರಲ್ಲಿ. ಸದಾನಂದಗೌಡ ರು ಮುಖ್ಯಮಂತ್ರಿಯಾಗಿದ್ದಾಗ.  ಹಾಗಾದರೆ ಈ ಆಯೋಗ 7ವರ್ಷಗಳ ಕಾಲ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿತೆ?  ಖಂಡಿತ ಇಲ್ಲ.
2005 ರಲ್ಲಿ ಆಯೋಗವನ್ನು ರಚನೆಮಾಡಿದ ಸರ್ಕಾರ,  ಹಣವನ್ನು ಬಿಡುಗಡೆ ಮಾಡಿದ್ದು 2010ರ ಕೊನೆಯಲ್ಲಿ.  2010 ರ ಕೊನೆಯಲ್ಲಿ ಹಣ ಬಿಡುಗಡೆಯಾದಾಗ ತರಾತುರಿಯಲ್ಲಿ ಸಮೀಕ್ಷೆ ನಡೆಸಿ, ವರದಿ ಸಿದ್ದಪಡಿಸಿ ನೀಡಿದ ಶಿಫಾರಸ್ಸುಗಳೆಂದರೆ…..
·         ಪರಿಶಿಷ್ಟ ಜಾತಿಯ 101 ಉಪಜಾತಿಗಳನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ ಶೇ.15ರಷ್ಟು ಮೀಸಲನ್ನು ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡುವಂತೆ ನ್ಯಾ. ಸದಾಶಿವ ಆಯೋಗವು ಸರಕಾರಕ್ಕೆ ಶಿಫಾರಸು ಮಾಡಿದೆ.
·         ಪರಿಶಿಷ್ಟ ಜಾತಿ ಸಮುದಾಯಕ್ಕೆ ಶೇ.15ರಷ್ಟಿರುವ ಮೀಸಲು ಹಾಗೂ ಸರಕಾರಿ ಸೌಲಭ್ಯವನ್ನು ಜನಸಂಖ್ಯೆಗೆ ಆಧಾರವಾಗಿ ಹಂಚಿಕೆ ಮಾಡಬೇಕು.
·         ಶೇ.33.4ರಷ್ಟಿರುವ ಎಡಗೈ (ಮಾದಿಗರು)  ಸಮುದಾಯಕ್ಕೆ ಶೇ.6,   ಶೇ.32ರಷ್ಟಿರುವ ಬಲಗೈ (ಹೊಲೆಯರು) ಸಮುದಾಯಕ್ಕೆ ಶೇ.5,  ಶೇ.23.64ರಷ್ಟಿರುವ 'ಸ್ಪೃಶ್ಯ ಪರಿಶಿಷ್ಟ'ರಿಗೆ ಶೇ.3,(ಲಂಬಾಣಿ. ಕೊರಮ, ಕೊರಚ, ಭೋವಿ, ಭಜಂತ್ರಿ ) ಶೇ.4.65ರಷ್ಟಿರುವ ಇತರೆ ಪರಿಶಿಷ್ಟರಿಗೆ  ಶೇ.1ರಷ್ಟು ಮೀಸಲು ಕಲ್ಪಿಸಬಹುದು.
·         ದಲಿತರಲ್ಲಿ ಅತ್ಯಂತ ದಯನೀಯವಾಗಿ ಬದುಕುತ್ತಿರುವವರು ಇದ್ದಾರೆ. ಎಲ್ಲರನ್ನೂ ಒಂದೇ ಚೌಕಟ್ಟಿನಲ್ಲಿ ನೋಡುವುದಕ್ಕಿಂತ ಆರ್ಥಿಕ, ಸಾಮಾಜಿಕ ಸ್ಥಿತಿಗೆ ಅನುಗುಣವಾಗಿ ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ ಒಳಮೀಸಲು ಕಲ್ಪಿಸಬೇಕು.
ಮಂಡಲ್, ವೆಂಕಟಸ್ವಾಮಿ ವರದಿ ಬಳಿಕ ಪರಿಶಿಷ್ಟ ಸಮುದಾಯದ ಬಗ್ಗೆ ವರದಿ ನೀಡಿದ ಸದಾಶಿವ ಆಯೋಗ.
ಒಳಮೀಸಲು ವಿಂಗಡಿಸಿ ರಾಜ್ಯ ಸರಕಾರ ಇದನ್ನು ಜಾರಿ ಮಾಡಿದರೆ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಅಸಿಂಧುವಾಗುತ್ತದೆ. ಹಾಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು  ಎಂದು ನ್ಯಾ. ಎ.ಜೆ. ಸದಾಶಿವ ರವರು ವರದಿಯಲ್ಲಿ ಶಿಫಾರಸ್ಸು ಮಾಡಿದ್ದಾರೆ. 
 ಈ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡದಿರುವ ಹಾಗೆ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

 
                                                                          ಚೋಳರಾಜ್ ನಾಯ್ಕ್, ಬಳ್ಳಾರಿ.

                                                                                                   9886518398.

No comments:

Post a Comment