ಜಗಳೂರು: ಸದಾಶಿವ ಆಯೋಗದ ವರದಿ ವಿರೋಧಿಸಿ ಭೋವಿ, ಕೊರಚ, ಲಂಬಾಣಿ, ಕೊರಮ, ಶಿಳ್ಲೇಕ್ಯಾತ, ಸುಡಗಾಡು ಸಿದ್ದ ಸಮಾಜದವರು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ಗೆ ಮನವಿ ಸಲ್ಲಿಸಿದ್ದಾರೆ.
ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿ ವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಪರಿಶಿಷ್ಟ ಜಾತಿಯ ಉಪ ಜಾತಿಗಳಾದ ಭೋವಿ, ಲಂಬಾಣಿ, ಕೊರಚ, ಕೊರಮ, ಸುಡುಗಾಡು ಸಿದ್ದ ಸೇರಿದಂತೆ ನೂರಕ್ಕೂ ಹೆಚ್ಚು ಸಮುದಾಯ ಗಳಿವೆ. ಈ ಶೋಷಿತ ಸಮುದಾಯಗಳು ಸ್ವಾತಂತ್ರ್ಯ ಪೂರ್ವದಿಂದಲೂ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದು ಳಿದಿದ್ದು, ಸಂವಿಧಾನಿಕ ಹಕ್ಕುಗಳಿಂದ ವಂಚಿತರಾಗಿ ದಯನೀಯ ಸ್ಥಿತಿಯಲ್ಲಿ ಜೀವನ ನಿರ್ವಹಣೆ ಮಾಡುತ್ತಿವೆ ಎಂದು ಅಲವತ್ತುಗೊಂಡರು.
ಅಂಬೇಡ್ಕರ್ರ ಪರಿಶ್ರಮದಿಂದ ನೂರಕ್ಕೂ ಹೆಚ್ಚು ಶೋಷಿತ ಸಮಾಜಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಸಂವಿಧಾನಿಕ ಸೌಲಭ್ಯ ಕಲ್ಪಿಸಿದ್ದು, 2005 ರಲ್ಲಿ ರಚನೆಯಾದ ಸದಾಶಿವ ಆಯೋಗದ ಒಳ ಮೀಸಲು ನೆಪದಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಒಗ್ಗ ಟ್ಟನ್ನು ಮುರಿಯುವ ಅವೈಜ್ಞಾನಿಕ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ ಎಂದು ಆರೋಪಿಸಿದರು.
ಈ ವರದಿ ಪಕ್ಷಪಾತದಿಂದ ಕೂಡಿದ್ದು, ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಉಪಜಾತಿಗಳಾದ ಭೋವಿ, ಲಂಬಾಣಿ, ಕೊರಮ, ಕೊರಚ ಸುಡುಗಾಡು ಸಿದ್ದ ಸಮುದಾಯದ ಜನಸಂಖ್ಯೆ ಸುಮಾರು 2.80 ಕೋಟಿ ಇದೆ. ಆದರೆ, ಸದಾಶಿವ ಆಯೋಗ ನೀಡಿರುವ ವರದಿ ಈ ಸಮಾಜಗಳಿಗೆ ಮಾರಕವಾಗಿದೆ. ಪೂರ್ವಗ್ರಹ ಪೀಡಿತ ಒಳ ಮೀಸಲು ವರದಿಯನ್ನು ಸರಕಾರ ತಿರಸ್ಕರಿಸ ಬೇಕೆಂದು ಒತ್ತಾಯಿಸಿದರು.
ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಪುರು ಷೊತ್ತಮನಾಯ್ಕ, ಭೋವಿ ಸಮಾಜದ ಕೇಶವ ಮೂರ್ತಿ, ಶ್ರೀನಿವಾಸ್, ಎ.ನಾರಾಯಣ್, ಎಂ.ಆರ್.ಪುಟ್ಟಣ್ಣ, ಅಂಜಿನಪ್ಪ, ಲಂಬಾಣಿ ಸಮಾಜದ ಸುರೇಶ್ನಾಯ್ಕ, ಶಿಳ್ಳೇಕ್ಯಾತ ಸಮಾಜದ ಪಂಪಣ್ಣ, ಕೊರಚ ಸಮಾಜದ ಬಾಬೇಶ್ ಪಾಲ್ಗೊಂಡಿದ್ದರು.
ವಿಕ ಸುದ್ದಿಲೋಕ| Updated: Sep 28, 2013
ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿ ವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಪರಿಶಿಷ್ಟ ಜಾತಿಯ ಉಪ ಜಾತಿಗಳಾದ ಭೋವಿ, ಲಂಬಾಣಿ, ಕೊರಚ, ಕೊರಮ, ಸುಡುಗಾಡು ಸಿದ್ದ ಸೇರಿದಂತೆ ನೂರಕ್ಕೂ ಹೆಚ್ಚು ಸಮುದಾಯ ಗಳಿವೆ. ಈ ಶೋಷಿತ ಸಮುದಾಯಗಳು ಸ್ವಾತಂತ್ರ್ಯ ಪೂರ್ವದಿಂದಲೂ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದು ಳಿದಿದ್ದು, ಸಂವಿಧಾನಿಕ ಹಕ್ಕುಗಳಿಂದ ವಂಚಿತರಾಗಿ ದಯನೀಯ ಸ್ಥಿತಿಯಲ್ಲಿ ಜೀವನ ನಿರ್ವಹಣೆ ಮಾಡುತ್ತಿವೆ ಎಂದು ಅಲವತ್ತುಗೊಂಡರು.
ಅಂಬೇಡ್ಕರ್ರ ಪರಿಶ್ರಮದಿಂದ ನೂರಕ್ಕೂ ಹೆಚ್ಚು ಶೋಷಿತ ಸಮಾಜಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಸಂವಿಧಾನಿಕ ಸೌಲಭ್ಯ ಕಲ್ಪಿಸಿದ್ದು, 2005 ರಲ್ಲಿ ರಚನೆಯಾದ ಸದಾಶಿವ ಆಯೋಗದ ಒಳ ಮೀಸಲು ನೆಪದಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಒಗ್ಗ ಟ್ಟನ್ನು ಮುರಿಯುವ ಅವೈಜ್ಞಾನಿಕ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ ಎಂದು ಆರೋಪಿಸಿದರು.
ಈ ವರದಿ ಪಕ್ಷಪಾತದಿಂದ ಕೂಡಿದ್ದು, ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಉಪಜಾತಿಗಳಾದ ಭೋವಿ, ಲಂಬಾಣಿ, ಕೊರಮ, ಕೊರಚ ಸುಡುಗಾಡು ಸಿದ್ದ ಸಮುದಾಯದ ಜನಸಂಖ್ಯೆ ಸುಮಾರು 2.80 ಕೋಟಿ ಇದೆ. ಆದರೆ, ಸದಾಶಿವ ಆಯೋಗ ನೀಡಿರುವ ವರದಿ ಈ ಸಮಾಜಗಳಿಗೆ ಮಾರಕವಾಗಿದೆ. ಪೂರ್ವಗ್ರಹ ಪೀಡಿತ ಒಳ ಮೀಸಲು ವರದಿಯನ್ನು ಸರಕಾರ ತಿರಸ್ಕರಿಸ ಬೇಕೆಂದು ಒತ್ತಾಯಿಸಿದರು.
ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಪುರು ಷೊತ್ತಮನಾಯ್ಕ, ಭೋವಿ ಸಮಾಜದ ಕೇಶವ ಮೂರ್ತಿ, ಶ್ರೀನಿವಾಸ್, ಎ.ನಾರಾಯಣ್, ಎಂ.ಆರ್.ಪುಟ್ಟಣ್ಣ, ಅಂಜಿನಪ್ಪ, ಲಂಬಾಣಿ ಸಮಾಜದ ಸುರೇಶ್ನಾಯ್ಕ, ಶಿಳ್ಳೇಕ್ಯಾತ ಸಮಾಜದ ಪಂಪಣ್ಣ, ಕೊರಚ ಸಮಾಜದ ಬಾಬೇಶ್ ಪಾಲ್ಗೊಂಡಿದ್ದರು.
ವಿಕ ಸುದ್ದಿಲೋಕ| Updated: Sep 28, 2013
No comments:
Post a Comment